ಹುಬ್ಬಳ್ಳಿ- ಹೈದರಾಬಾದ್ ನಡುವೆ “ಐರಾವತ” ವೋಲೊ ಎಸಿ ಬಸ್ ಸಂಚಾರ ಆರಂಭ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಿಂದ ಹೈದರಾಬಾದ್ಗೆ ಹೋಗಿ ಬರುವ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ ಹಾಗೂ ಹೈದರಾಬಾದ್ ನಡುವೆ ಐರಾವತ ವೋಲ್ಲೊ ಎಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ.

ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳು, ಸಾರ್ವಜನಿಕರ ಸಮಕ್ಷಮದಲ್ಲಿ ಬಸ್ಸಿಗೆ ಪೂಜೆ ಸಲ್ಲಿಸಿ ನೂತನ ಮಾರ್ಗಕ್ಕೆ ಶುಭ ಹಾರೈಸಲಾಯಿತು.
ನಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ಮಾತನಾಡಿ, ವಾಣಿಜ್ಯ, ವಹಿವಾಟು ಮತ್ತಿತರ ಕೆಲಸ ಕಾರ್ಯಗಳಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಿಂದ ಪ್ರಯಾಣ ಮಾಡುವ ಸಾರ್ವಜನಿಕರ ಅನುಕೂಲಕ್ಕಾಗಿ ಹುಬ್ಬಳ್ಳಿ ಹಾಗೂ ಹೈದರಾಬಾದ್ ನಡುವೆ ಎಸಿ ಸ್ಲಿಪರ್ ಹಾಗೂ ನಾನ್ ಏಸಿ ಸ್ವೀಪರ್ ಬಸ್ಗಳ ಸೌಲಭ್ಯ ಕಲ್ಪಿಸಲಾಗಿದೆ. ಇವುಗಳ ಜೊತೆಗೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ಈಗ ಐರಾವತ ವೋಲೊ ಎಸಿ ಸೆಮಿ ಸ್ಟೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಬಸ್ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತದೆ. ವೇಳಾಪಟ್ಟಿ ಹುಬ್ಬಳ್ಳಿ-ಹೈದರಾಬಾದ್
ಗೋಕುಲ ರಸ್ತೆ ಬಸ್ ನಿಲ್ದಾಣ ರಾತ್ರಿ 9-00ಗಂಟೆ, ಹೊಸೂರು ಬಸ್ ನಿಲ್ದಾಣ 9-15 ಗದಗ ರಾ. 10-15, ಕೊಪ್ಪಳ ರಾ.11-30, ಗಂಗಾವತಿ ರಾ.00-45, ಸಿಂಧನೂರು ಬೆಳಿಗ್ಗೆ 2-00, ರಾಯಚೂರು ಬೆ.3-30ಕ್ಕೆ ಹೊರಟು ಶಕ್ತಿನಗರ, ಮೆಹಬೂಬ ನಗರ ಮಾರ್ಗವಾಗಿ ಮರುದಿನ ಬೆಳಿಗ್ಗೆ 7-00 ಕ್ಕೆ ಹೈದರಾಬಾದ ತಲುಪುತ್ತದೆ. ಹೈದರಾಬಾದ್ ನ ಮಹಾತ್ಮಾ ಗಾಂಧಿ ಬಸ್ ನಿಲ್ದಾಣದಿಂದ ರಾತ್ರಿ 10-00ಗಂಟೆಗೆ ಹೊಡುತ್ತದೆ. ಮರುದಿನ ಬೆಳಗ್ಗೆ 8-00ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತದೆ ಎಂದು ತಿಳಿಸಿದರು.
ಮುಂಗಡ ಬುಕಿಂಗ್ಗೆ ರಿಯಾಯಿತಿ:ಅಪಘಾತ ಪರಿಹಾರ ವಿಮೆ, ಟೋಲ್ ಫೀ, ಜಿ.ಎಸ್.ಟಿ ಸೇರಿ ಹುಬ್ಬಳ್ಳಿಯಿಂದ ಹೈದರಾಬಾದ್ಗೆ ಒಟ್ಟು 1567 ರೂಪಾಯಿ ಪ್ರಯಾಣ ದರ ನಿಗದಿಪಡಿಸಲಾಗಿದೆ.www.ksrtc.in, KSRTC Mobile App ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ಒಂದೇ ಟಿಕೆಟ್ ನಲ್ಲಿ 4 ಅಥವ ಹೆಚ್ಚು ಆಸನ ಕಾಯ್ದಿರಿಸಿದರೆ ಪ್ರಯಾಣದರದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕಟ್ ಪಡೆದುಕೊಂಡರೆ ಹಿಂದಿರುಗುವ ಪ್ರಯಾಣದರದಲ್ಲಿ ಶೇಕಡ 10ರಷ್ಟು ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಭಾಗೀಯ ಸಂಚಾರ ಅಧಿಕಾರಿ ಸಂಗಪ್ಪ ಮಾಟೊಳಿ, ಡಿಪೊ ಮ್ಯಾನೇಜರ ವಿನೋದ ಅಮ್ಮಣಗಿ, ನಿಲ್ದಾಣಾಧಿಕಾರಿ ವಿ.ಎಸ್.ಹಂಚಾಟೆ ಮತ್ತಿತರರು ಇದ್ದರು.