
ಧಾರವಾಡ ದಿ 22, ಕನ್ನಡ ನಾಡಿನ ಭಾಷೆ ನೆಲ ಜಲ ಸಂಸ್ಕೃತಿಗಳ ಸಂರಕ್ಷಣೆ ಮತ್ತು ವರ್ಧನೆಗಾಗಿ ಹಾಗೂ ಸಮಗ್ರ ಕರ್ನಾಟಕ ಅಭಿವೃದ್ಧಿ ಮತ್ತು ಏಳಿಗೆಗಾಗಿ ಶ್ರಮಿಸುವ ಉದ್ದೇಶದಿಂದ ಇದೆ ದಿ 25 ರಂದು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಘಟಕಕ್ಕೆ ಚುನಾವಣೆ ನಡೆಯಲಿದ್ದು ಪಾಪು ಅಭಿಮಾನಿ ಬಳಗದಿಂದ ನ್ಯಾಯವಾದಿಗಳಾದ ಮಾಜಿ ಶಾಸಕ ಮೋಹನ್ ಲಿಂಬಿಕಾಯಿ ಪ್ರಕಾಶ್ ಉಡಕೇರಿ ಮತ್ತು ಡಾ ಶರಣಪ್ಪ ಕೊಟ್ಟಿಗೆ ರವರ ನೇತೃತ್ವದಲ್ಲಿ ಅಧ್ಯಕ್ಷ ಪದಾಧಿಕಾರಿಗಳ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಸ್ಥಾನಕ್ಕೆ ಸ್ಪರ್ಧಿಸಿರುವ ತಂಡಕ್ಕೆ ಆಶೀರ್ವದಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮತದಾರ ಬಾಂಧವರಲ್ಲಿ ವಿನಂತಿಸಿದರು, ದಿ 22 ರಂದು ಧಾರವಾಡದ ಚುನಾವಣೆ ಪ್ರಚಾರ ಕಾರ್ಯದಲ್ಲಿ ನಡೆದ ಸಭೆಯಲ್ಲಿ ಪ್ರಕಾಶ್ ಉಡಕೇರಿ ಡಾ ಶರಣಪ್ಪ ಕೊಟ್ಟಿಗೆ ಸಂತೋಷ್ ಪಟ್ಟಣಶೆಟ್ಟಿ ಮಾಜಿ ಹುಡಾ ಅಧ್ಯಕ್ಷ ಅನ್ವರ್ ಮುಧೋಳ್ ರಾಜಶೇಖರ್ ಮೆಣಸಿನಕಾಯಿ ಸುರೇಶ್ ಸವಣೂರ ಸೇರಿದಂತೆ ಮುಂತಾದವರು ಉಪಸಿತರಿದ್ದರು