ಅಪರಾಧ
Trending

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಅಣ್ಣನಿಗೆ ಚಾಕು ಹಾಕಿದ ತಮ್ಮ ನವನಗರದಲ್ಲಿ ಘಟನೆ

ಹುಬ್ಬಳ್ಳಿ: ಕ್ಷುಲಕ ಕಾರಣಕ್ಕೆ ಅಣ್ಣತಮ್ಮಂದಿರ ಮಧ್ಯ ಜಗಳ ನಡೆದು, ಅಣ್ಣನಿಗೆ ಸ್ವಂತ ತಮ್ಮ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಹುಬ್ಬಳ್ಳಿಯ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.

ಚಾಕುವಿನಿಂದ ಹಲ್ಲೆಗೊಳಗಾದ ಯುವಕ ತೋಪಿಕ್ ಇಗ್ಲಿಕಾರ ಆಗಿದ್ದಾನೆ. ಚಾಕು ಹಾಕಿದ ಯುವಕ ಮುಸ್ತಾಕ್ ಇಡ್ಲಿಕಾರ್, ನಗರದ

ನಂದೀಶ್ವರ ನಗರ ಬಡಾವಣೆಯಲ್ಲಿ ವಾಸವಿದ್ದ, ಮುಸ್ತಾಕ್ ಮತ್ತು ತೊಪಿಕ್‌ ಇಬ್ಬರು ಅಣ್ಣತಮ್ಮಂದಿರು. ಮುಂಜಾನೆ ಕ್ಷುಲಕ ಕಾರಣಕ್ಕೇ ಜಗಳ ಆಡಿದ್ದಾರೆ, ಜಗಳ ಅತಿರೇಕಕ್ಕೆ ಹೋಗಿ ತಮ್ಮ ಮುಸ್ತಾಕ್ ಕೈಯಲ್ಲಿದ್ದ ಚಾಕುವಿನಿಂದ ಅಣ್ಣನ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ. ಅಲ್ಲಿದ್ದ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ತೋಪಿಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಪ್ರಕರಣ ನವನಗರ ಎಪಿಎಂಸಿ ಠಾಣೆಯಲ್ಲಿ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!